“ನೈಜವಾದ ಕಲಾಪ್ರತಿಭೆ ಗ್ರಾಮೀಣ ಪ್ರದೇಶಗಳಲ್ಲಿ ಅಗಾಧವಾಗಿದೆ. ಗ್ರಾಮೀಣ ಪ್ರದೇಶದ ಕಲಾವಿದರು ನಾಟಕ ಕಲೆಯನ್ನು, ಇತರ ಕಲೆಯನ್ನು ಜೀವಂತವಾಗಿಸಿದ್ದಾರೆ. ಆದ್ದರಿಂದ ನಾನು ಗ್ರಾಮೀಣ ಪ್ರದೇಶದಲ್ಲಿ ನನ್ನ ನಾಟಕಗಳನ್ನು ಹೆಚ್ಚು ಪ್ರದರ್ಶಿಸಲು ಸಾಧ್ಯವಾಯಿತು. ಹಳ್ಳಿಯ ಜನರು ಕಲಾವಿದರನ್ನು ಪ್ರೋತ್ಸಾಹಿಸುವ ರೀತಿ ಅನನ್ಯ. ಇದು 500ಕ್ಕೂ ಹೆಚ್ಚು ಕಲಾವಿದರನ್ನು ರೂಪಿಸಲು, ಬೆಳೆಸಲು ಹಾಗೂ 27 ನಾಟಕಗಳನ್ನು ರಚಿಸಲು, ಬರೆಯಲು 700ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಲು ಕಾರಣವಾಯಿತು,” ಎಂದು ಹಿರಿಯ ರಂಗಭೂಮಿ ಕಲಾವಿದ ಎ.ಕೆ.ವಿ. ಬೇಂಡೆಲ್ ಅವರು ನುಡಿದರು.
ಅವರು ಸೆಪ್ಟಂಬರ್ 15ರಂದು ಅವರ ಮನೆಯಿಂದ ಪ್ರಸಾರವಾದ ರೇಡಿಯೋ ಸಾರಂಗ್’ನ 36ನೇ ಸಂಚಿಕೆಯ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದರು.