ದಕ್ಷಣ ಕನ್ನಡ ಜಿಲ್ಲಾಡಳಿತ ವತಿಯಿಂದ ನೆಹರು ಮೈದಾನದಲ್ಲಿ ನವೆಂಬರ್ 1ರಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ನೇರ ಪ್ರಸಾರ ಕಾರ್ಯಕ್ರಮವು ರೇಡಿಯೋ ಸಾರಂಗ್ ವತಿಯಿಂದ ಹಮ್ಮಿಕೊಳ್ಳಲಾಯಿತು. ನಾಡಗೀತೆ, ರೈತಗೀತೆಯಿಂದ ಈ ಕಾರ್ಯಕ್ರಮವು ಆರಂಭವಾಯಿತು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಗೌರವ ವಂದನೆಯೊಂದಿಗೆ ಧ್ವಜಾರೋಹಣ ನಡೆಸಿ ಕನ್ನಡ ಭಾಷೆಯ ಬಗ್ಗೆ, ಸರಕಾರದ ಯೋಜನೆಗಳ ಬಗ್ಗೆ ಆಡಿದ ಮಾತುಗಳನ್ನು ಪ್ರಸಾರಿಸಲಾಯಿತು. ಸಚಿವರ ಸಂದೇಶದ ನಂತರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.
ಕಂಬಳ, ಜಾನಪದ, ಕ್ರೀಡೆ, ಸಾಂಸ್ಕೃತಿಕ, ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧಕರ ಜೊತೆ ಸಾರಂಗ್ ತಂಡ ಮಾತುಕತೆ ನಡೆಸಿತು. ಜಿಲ್ಲಾಡಳಿತ ಗುರುತಿಸಿದಕ್ಕೆ ಹರ್ಷಪಟ್ಟ ಸಾಧಕರು ಸಾರಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾರಂಗ್’ಗೆ ಬಂದು ಕಾರ್ಯಕ್ರಮ ನೀಡಿದ ಹಲವರಿಗೆ ಈ ಬಾರಿ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರವಾಗಿತ್ತು. ಈ ನೇರಪ್ರಸಾರ ಕಾರ್ಯಕ್ರಮದಲ್ಲಿ ಆರ್.ಜೆ.ಎಡ್ವರ್ಡ್, ರಿಷಲ್, ನೇರವಾಗಿ ವೀಕ್ಷಕವಿವರಣೆ ನೀಡಿದರು. ಶ್ಯಾಮ್ ಮಂಗಳಾದೇವಿ ತಾಂತ್ರಿಕ ನೆರವು ನೀಡಿದರೆ ಸಹಕಾರ ಅಶ್ವಿನಿಯವರು ನೀಡಿದರು. ಸ್ಟುಡಿಯೋದಿಂದ ಆರ್.ಜೆ. ಸೈಫುಲ್ಲ ಕಾರ್ಯಕ್ರಮ ನಿರ್ವಹಣೆ ಮಾಡಿದರು.
- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್