"ವಿಶೇಷ ಚೇತನರನ್ನು ಧನಾತ್ಮಕವಾಗಿ ಗುರುತಿಸುವ ಮೂಲಕ ಪ್ರೋತ್ಸಾಹಿಸಿ," ಎಂದು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ಕೆ.ಎಂ.ಸಿ ಆಸ್ಪತ್ರೆಯ ಮೂಳೆ ವಿಭಾಗದ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಆರ್ ಕಾಮತ್ ಅವರು ಅಭಿಪ್ರಾಯಪಟ್ಟರು.ಇವರು ಡಿಸೆಂಬರ್ 03ರಂದು ’ವಿಶ್ವ ವಿಕಲಚೇತನ’ ರ ದಿನದ ಪ್ರಯುಕ್ತ ನೇರಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕೊರೋನದ ಈ ದಿನಗಳಲ್ಲಿ ವಿಭಿನ್ನ ಸಾಮರ್ಥ್ಯದವರ ನಾಯಕತ್ವ ಮತ್ತು ಭಾಗಿದಾರಿಕೆಯ ಮೂಲಕ ಈ ಕಠಿಣ ಸಂದಭ೯ಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು, ಮತ್ತು ’ಎಲ್ಲಾ ನ್ಯೂನತೆಗಳು ಕಣ್ಣಿಗೆ ಕಾಣುವುದಿಲ್ಲ’ ಎಂಬ ಈ ವಷ೯ದ ಧೈಯೋದ್ದೇಶಗಳನ್ನು ತಿಳಿಸಿದರು.
ದೈಹಿಕವಾಗಿ, ಬೌದ್ಧಿಕವಾಗಿ, ಮಾನಸಿಕವಾಗಿ ಮತ್ತು ತೀವ್ರ ನರರೋಗ ಸಂಬಂಧಿತರನ್ನು ವಿಕಲಚೇತನರು ಎಂದು ಕರೆಯುತ್ತಾರೆ. ಅದರ ಜೊತೆಗೆ ಕಣ್ಣಿಗೆ ಕಾಣದ ನ್ಯೂನತೆಗಳು ಇವೆ, ಅಂದರೆ ಭಾಷೆಯ ಮೇಲಿನ ಸಮಸ್ಯೆ, ಲೆಕ್ಕಹಾಕೋದಕ್ಕೆ ಕಷ್ಟ ಆಗುವುದು - ಇದೆಲ್ಲ ಕಣ್ಣಿಗೆ ಕಾಣದ ವಿಕಲತೆಗಳು ಹಾಗಾಗಿ ಅಂಥವರನ್ನು ಕಡೆಗಣಿಸುವಂತಿಲ್ಲ. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ವಿಕಲಾಂಗ ವ್ಯಕ್ತಿಗಳಿಗಾಗಿ ವಿಶೇಷ ಸೌಲಭ್ಯಗಳನ್ನು ಮಾಡಿಕೊಡಬೇಕು, ಎಂದರು.