ನನ್ನೊಳಗೆ ಅಡಗಿದ್ದ ರಾಜಕುಮಾರ್ ಕಂಠ ಸಿರಿ ಜೀವನ ಕ್ಕೆ ದಾರಿ ತೋರಿಸಿತು, ಎಂದು ಜೂನಿಯರ್ ರಾಜಕುಮಾರ್ ಖ್ಯಾತಿಯ ಕೆ. ಆರ್. ಅಬ್ಬಾಸ್ ಕುಂಜತ್ತಬೈಲ್ ನುಡಿದರು.
ಅವರು ಮಾರ್ಚ್ 30ರಂದು ರೇಡಿಯೋ ಸಾರಾಂಗ್’ನ ಹೃದಯರಾಗ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕುಂಜತ್ತಬೈಲ್ ತನ್ನೂರಿನ ಒಂದು ಕಾರ್ಯಕ್ರಮ ದಲ್ಲಿ ಇವರು ಹಾಡಿದ ಹಾಡಿನಲ್ಲಿ ರಾಜಕುಮಾರ್ ಧ್ವನಿಯನ್ನು ಗುರುತಿಸಿದ ಪ್ರೇಕ್ಷಕರು ಪ್ರಶಂಸಿದರು. ಇದು ಧ್ವನಿಕಲಾವಿದರಾಗಿ ಜೂನಿಯರ್ ರಾಜಕುಮಾರ್ ಎಂಬ ಖ್ಯಾತಿಯನ್ನು ನೀಡಿತು, ಎಂದರು.
1989ರಿಂದ ಶುರುವಾದ ಹಾಡುವ ಕಾಯಕ ದೇಶ ವಿದೇಶದಲ್ಲೂ ಕಾರ್ಯಕ್ರಮ ನೀಡುವಂತೆ ಮಾಡಿತು. ಇದಲ್ಲದೆ ರಾಜಕುಮಾರ್ ಅವರ ರೀತಿಯಲ್ಲಿ ಉಡುಪು ಹೇರ್ ಕಟ್, ಮೀಸೆ; ಒಟ್ಟಿನಲ್ಲಿ ಪ್ರೇಕ್ಷಕರು ರಾಜಕುಮಾರ್ ಅವರನ್ನು ನನ್ನಲ್ಲಿ ಕಾಣುವಂತೆ ಅವರ ಆದರ್ಶ ಗುಣಗಳನ್ನು ಬೆಳೆಸಿಕೊಂಡೆ, ಎಂದ ಇವರು ರಾಜಕುಮಾರ್ ಜತೆ ಗುರುರಾಘವೇಂದ್ರರ ’ಏನು ದಾಹ ಏನು ಮೋಹ’ ಭಕ್ತಿಗೀತೆ ಹಾಡಿದ್ದು ಮರೆಯಲಾರದ ಕ್ಷಣ ಎಂದು ನೆನೆದರು. ಇದಲ್ಲದೆ ಪಿ. ಬಿ. ಶ್ರೀನಿವಾಸ್, ಎಲ್. ಆರ್. ಈಶ್ವರಿ ಇವರ ಜತೆ ಹಾಡುವ ಅವಕಾಶ ಸಿಕ್ಕಿದ್ದು ಮರೆಯಲಾರದ ಅನುಭವ ಎಂದರು.